ಯುವಪೀಳಿಗೆಯಲ್ಲಿ ಕನ್ನಡಕದ ಬಳಕೆ ಬದಲು ಹೆಚ್ಚಾಗ್ತಿದೆ ಲೇಸಿಕ್‌/LASIK ಚಿಕಿತ್ಸೆ

varthajala
0

 ಕನ್ನಡಕ ಧರಿಸೋದು ಅಂದ್ರೆ ಹಲವರಿಗೆ ಇಷ್ಟವಾಗೋದಿಲ್ಲ,  ಕೆಲವರಿಗೆ ಸೌಂದರ್ಯತವಾಗಿ ಕಾಣೋದಿಲ್ಲ ಎಂಬ ಚಿಂತೆ, ಇನ್ನೂ ಕೆಲವರಿಗೆ ಕನ್ನಡಕ ಧರಿಸೋದು ಅಂದ್ರೆ ಕಿರಿಕಿರಿ, ಕೆಲವೊಮಮ್ಮೆ ಕನ್ನಡಕ ತೆಗೆದುಕೊಂಡು ಹೋದಾಗ ಎದುರಾಗುವ ಕಸಿವಿಸಿ, ಹೀಗೆ ನಾನಾ ರೀತಿಯ ಕಾರಣಗಳಿಂದ ಕನ್ನಡಕ ಧರಿಸೋಕೆ ಹಿಂಜರಿಯುತ್ತಾರೆ. ಇನ್ನು ಕಾಂಟಾಕ್ಟ್‌ ಲೆನ್ಸ್‌ ಬಳಕೆ ಕೆಲವರಿಗೆ ದುಬಾರಿ ಅಥವಾ ಅದನ್ನು ಧರಿಸುವುದು ಇಷ್ಟವಾಗದಿರಬಹುದು. ಇನ್ನು ಆಧುನಿಕ ಯುವ ಜನತೆ ಕನ್ನಡಕ ಮತ್ತು ಕಾಂಟಾಕ್ಟ್‌ ಲೆನ್ಸ್‌ ಬಳಕೆಯ ಬದಲು ಲೇಸರ್‌ ಚಿಕಿತ್ಸೆಯ ಕುರಿತು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ ಎಂದು ಬೆಂಗಳೂರಿನ ವಾಸವಿ ಆಸ್ಪತ್ರೆಯ ನೇತ್ರ ತಜ್ಞರಾದ ಡಾ. ಗಾರ್ಗಿ ದಾಸ್‌ ಹೇಳಿದ್ದಾರೆ. 


ಲೇಸರ್ ಶಸ್ತ್ರಚಿಕಿತ್ಸೆಯು ಗೋಳಾಕಾರದ (Spherical) ಮತ್ತು ಸಿಲಿಂಡ್ರಿಕಲ್ (Cylindrical) ದೃಷ್ಟಿ ದೋಷಗಳನ್ನು ಸರಿಪಡಿಸಲು ಪರಿಣಾಮಕಾರಿ ವಿಧಾನಗಳಾಗಿದ್ದು. ಶೀತದ ವಾತಾವರಣದಲ್ಲಿ ಕನ್ನಡಕದ ಮೇಲೆ ಮಂಜು ಮುಸುಕುವುದು, ಜಿಮ್‌ನಲ್ಲಿ ಬೆವರಿನ ಕಿರಿಕಿರಿ ಅಥವಾ ಕಾಂಟ್ಯಾಕ್ಟ್ ಲೆನ್ಸ್‌ಗಳ ನಿರ್ವಹಣೆಯ ತೊಂದರೆಯಿಂದ ಮುಕ್ತಿಯನ್ನು ನೀಡುತ್ತದೆ.

ಫ್ಲಾಪ್‌ಲೆಸ್ ವಿಧಾನದ ಪ್ರಯೋಜನಗಳು
ಆಧುನಿಕ 'ಫ್ಲಾಪ್‌ಲೆಸ್' ಲೇಸರ್ ವಿಧಾನವು ಹೆಚ್ಚು ಸುರಕ್ಷಿತವಾಗಿದ್ದು,  ಕಡಿಮೆ ತೊಡಕುಗಳನ್ನು ಹೊಂದಿರುತ್ತದೆ. ಹಳೆಯ ವಿಧಾನಗಳಿಗೆ ಹೋಲಿಸಿದರೆ, ಇದರಲ್ಲಿ ಕಣ್ಣು ಒಣಗುವ (Dry eyes) ಸಮಸ್ಯೆ ಕಡಿಮೆ ಇರುತ್ತದೆ. ಅಲ್ಲದೆ ಶಸ್ತ್ರಚಿಕಿತ್ಸೆ ನಂತರ ದೃಷ್ಟಿ ಬೇಗನೆ ಚೇತರಿಸಿಕೊಳ್ಳುವುದರಿಂದ ಕ್ರೀಡಾಪಟುಗಳು ಮತ್ತು ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರು ಯಾವುದೇ ಆತಂಕವಿಲ್ಲದೆ ತಮ್ಮ ಕೆಲಸವನ್ನು ಮುಂದುವರಿಸಬಹುದು ಎಂದು ತಜ್ಞರು ವಿವರಿಸಿದ್ದಾರೆ.

ಯಾರು ಈ ಚಿಕಿತ್ಸೆಗೆ ಒಳಗಾಗಬಹುದು

ಈ ಚಿಕಿತ್ಸೆಗೆ ಒಳಗಾಗುವವರು ಕನಿಷ್ಟ 18 ವರ್ಷ ಮೇಲ್ಪಟ್ಟವರಾಗಿರಬೇಕು. ಕನಿಷ್ಠ ಆರು ತಿಂಗಳ ಕಾಲ ದೃಷ್ಟಿ ಸಾಮರ್ಥ್ಯದಲ್ಲಿ ಯಾವುದೇ ಬದಲಾವಣೆ ಹೊಂದಿರಬಾರದು.
ಕಣ್ಣಿನ ಕಾರ್ನಿಯಾ ಸಾಕಷ್ಟು ದಪ್ಪವಾಗಿರಬೇಕು. ಗರ್ಭಿಣಿಯರು ಅಥವಾ ಹಾಲುಣಿಸುವ ತಾಯಂದಿರು ಈ ಚಿಕಿತ್ಸೆಯನ್ನು ಸ್ವಲ್ಪ ಕಾಲ ತೆಗೆದುಕೊಳ್ಳದಿರುವುದು ಉತ್ತಮ. ಶಸ್ತ್ರಚಿಕಿತ್ಸೆಗೂ ಮೊದಲು ಕಣ್ಣಿನ ಸಂಪೂರ್ಣ ತಪಾಸಣೆ ಕೈಗೊಳ್ಳುವುದು ಅಗತ್ಯವಿರುತ್ತದೆ. ಈ ಲೇಸಿಕ್ (LASIK) ಶಸ್ತ್ರಚಿಕಿತ್ಸೆಯು ಕೇವಲ ದೃಷ್ಟಿ ದೋಷಗಳನ್ನು ಮಾತ್ರ ಸರಿಪಡಿಸುತ್ತದೆಯೇ ಹೊರತು ಕಣ್ಣಿನ ಇತರ ಕಾಯಿಲೆಗಳಿಗೆ ಪರಿಹಾರವಲ್ಲ ಎಂಬುದನ್ನು ಗಮನದಲ್ಲಿಡುವುದು ಮುಖ್ಯ ಎನ್ನುತ್ತಾರೆ ಡಾ. ಗಾರ್ಗಿ. ಈ ಲೇಸಿಕ್ ಚಿಕಿತ್ಸೆಯು ಅವರವರ ಆಯ್ಕೆಯಾಗಿದ್ದು,  ದೀರ್ಘಾವಧಿಯಲ್ಲಿ ಇದು ಲಾಭದಾಯಕವಾಗಿದೆ. ಸುಮಾರು 20 ರಿಂದ 25 ವರ್ಷಗಳ ಅವಧಿಯಲ್ಲಿ ಕನ್ನಡಕಗಳಿಗಾಗಿ ಮಾಡುವ ಒಟ್ಟು ವೆಚ್ಚವು ಲೇಸರ್ ಚಿಕಿತ್ಸೆಯ ವೆಚ್ಚಕ್ಕಿಂತ ಹೆಚ್ಚಾಗುತ್ತದೆ. ಹೀಗಾಗಿ ಈ ಚಿಕಿತ್ಸೆಯು ಹೆಚ್ಚು ಉಪಯುಕ್ತವಾಗಿದ್ದು, ಉದಾಹರಣೆಗೆ ಕ್ರೀಡಾಪಟುಗಳಿಗೆ ಆಟವಾಡುವಾಗ ಕನ್ನಡಕ ಒಡೆದು ಕಣ್ಣಿಗೆ ಗಾಯವಾಗುವ ಅಪಾಯವನ್ನೂ ಕೂಡ ಇದು ತಪ್ಪಿಸುತ್ತದೆ.

ಇಂದಿನ ಟ್ರೆಂಡ್

ಇಂದಿನ ಯುವ ಪೀಳಿಗೆಗೆ ಇದು ಹೆಚ್ಚು ಉಪಯುಕ್ತವಾಗಿದ್ದು, ಸೌಂದರ್ಯ ಮತ್ತು ಅನುಕೂಲಕರವಾಗಿದೆ. ಮದುವೆ ಅಥವಾ ಹಬ್ಬಗಳಂತಹ ಪ್ರಮುಖ ಕಾರ್ಯಕ್ರಮಗಳಿಗಿಂತ 2-3 ತಿಂಗಳ ಮೊದಲು ಅನೇಕರು ಈ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಅನುಭವಿ ವೈದ್ಯರಿಂದ ಚಿಕಿತ್ಸೆ ಪಡೆದರೆ, ಇದು ದೀರ್ಘಕಾಲದವರೆಗೆ ಸ್ಪಷ್ಟ ದೃಷ್ಟಿ ಮತ್ತು ಜೀವನಶೈಲಿಯಲ್ಲಿ ಉತ್ತಮ ಬದಲಾವಣೆಯನ್ನು ತರುತ್ತದೆ ಎಂದು ಡಾ. ಗಾರ್ಗಿ ದಾಸ್‌ ಅಭಿಪ್ರಾಯಪಡುತ್ತಾರೆ.


Post a Comment

0Comments

Post a Comment (0)