ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು ಇದರ ನಡುವೆಯೇ ಈ ಕೊಲೆಯಲ್ಲಿ ಅನ್ಯಕೋಮಿನ ಕಾನ್ಸೆ÷್ಟÃಬಲ್ ಯೋರ್ವ ಬಾಗಿಯಾಗಿದ್ದಾನೆ ಎನ್ನಲಾಗಿದೆ,
ಈ ಕೊಲೆಯ ಸುತ್ತಮುತ್ತ ಸಾಕಷ್ಟು ಅನುಮಾನ ಹುಟ್ಟುತ್ತಲೇ ಇದ್ದು ದಿನಕ್ಕೊಂದು ತಿರುವು ಪಡೆಯುತ್ತಿದೆ,
ಈ ಬೆಳವಣಿಗೆಗಳ ನಡುವೆಯೇ ಸುಹಾಸ್ ಶೆಟ್ಟಿ ಕೊಲೆಯಲ್ಲಿ ಸ್ಧಳೀಯ ಪೊಲೀಸರ ಕೈವಾಡವಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ, ಅಲ್ಲದೇ ಪೊಲೀಸರೇ ನನ್ನ ಮಗನನ್ನು ಸಾಯುವಂತೆ ಮಾಡಿದ್ದಾರೆ ಎಂದು ಸುಹಾಸ್ ತಾಯಿ ದೂರಿದ್ದಾರೆ,
ಈ ಕೊಲೆಯಲ್ಲಿ ಬಜಪೆ ಪೊಲೀಸ್ ಕಾನ್ಸೆ÷್ಟÃಬಲ್ ರಶೀದ್ ನೇರವಾಗಿ ಭಾಗಿಯಾಗಿದ್ದಾನೆ ಎನ್ನಲಾಗಿದೆ, ಈ ಹಿಂದೆ ಸುಹಾಸ್ ಬಜಪೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಈ ವೇಳೆ ಪದೇ ಪದೇ ಪೊಲೀಸ್ ಠಾಣೆಗೆ ಕರಿಸಿ ಕಿರುಕುಳ ನೀಡುತ್ತಿದ್ದರು,
ಅಲ್ಲದೇ ಕುಡುಪು ಎಂಬಲ್ಲಿ ಆಶ್ರಫ್ ಕೊಲೆಯ ಬಳಿಕ ಸುಹಾಸ್ ಶೆಟ್ಟಿಗೆ ರಶೀದ್ ನೀನು ಯಾವುದೇ ಮಾರಕಾಸ್ತçಗಳನ್ನು ಇಡಬೇಡ, ನಿನ್ನ ಜೊತೆ ಯಾರೂ ಯುವಕರು ಇರಬಾರದು, ಹೆಚ್ಚಿಗೆ ಓಡಾಡಬಾರದು ಎಂದು ಎಚ್ಚರಿಕೆ ನೀಡಿದ್ದ, ಜೊತೆಗೆ ಸುಹಾಸ್ ನ ಎಲ್ಲಾ ಚಲನ ವಲನಗಳನ್ನು ರಶೀದ್ ಗಮನಿಸುತ್ತಿದ್ದ,
ಕೊಲೆಯ ದಿನ ಸುಹಾಸ್ ಶೆಟ್ಟಿ ನಿರಾಯುಧವಾಗಿ ಹೋಗುತ್ತಿದ್ದಾನೆ ಎಂದು ಆರೋಪಿಗಳಿಗೆ ಮಾಹಿತಿ ನೀಡಿತ್ತಿದ್ದ ಎನ್ನಲಾಗಿದೆ ,ಸದ್ಯ ಈ ಬಗ್ಗೆ ಕೂಡ ಪೊಲೀಸರು ತನಿಖೆ ನಡೆಸಲಾಗುತ್ತಿದೆ,