ನವದೆಹಲಿ: ಪಾಪಿ ಉಗ್ರರ ಹೆಡೆಮುರಿ ಕಟ್ಟಿರುವ ಭಾರತೀಯ ಸೇನೆ ನಿಖರ ದಾಳಿ ಮೂಲಕ ಭಯೋತ್ಪಾದಕರಿಗೆ ಸಿಂಹಸ್ವಪ್ನವಾಗಿ ಪರಿಣಮಿಸಿದೆ, ಇದೀಗ ಆರ್ಮಿಯಿಂದಲೇ ಮತ್ತೊಂದು ಸ್ಫೋಟಕ ವಿಚಾರ ಹೊರಬಿದ್ದಿದೆ,
ಬಾರ್ಡರ್ ನಲ್ಲಿ ಅಪ್ರಚೋದಿತ ಗುಂಡಿನ ದಾಳಿಯನ್ನು ಸಮರ್ಥವಾಗಿ ಎದುರಿಸಿರುವ ಸೇನೆ ಲಷ್ಕರ್-ಈ-ತೊಯ್ಬಾ ಲಾಂಚ್ ಪ್ಯಾಡ್ ಮೇಲೆ ದಾಳಿ ನಡೆಸಿ ಉಗ್ರರ ಸದೆಬಡಿದಿದೆ, ಮೇ 9 ಹಾಗೂ 10 ರಂದು ಅಟ್ಯಾಕ್ ನಡೆದಿದ್ದು, ಈ ಬಗ್ಗೆ ಬಿಎಸ್ ಎಫ್ ಐಜಿ ಶಶಾಂಕ್ ಆನಂದ್ ಮಾಹಿತಿ ಬಿಚ್ಚಿಟ್ಟಿದ್ದಾರೆ,
ಪಾಕ್ ಕೆಣಕಿ ಬಾರ್ಡರ್ ನಲ್ಲಿ ಫೈರಿಂಗ್ ಮಾಡಿತು, ನಮ್ಮವರು ಹೆದರಲಿಲ್ಲ, ತಕ್ಕ ಪ್ರತ್ಯುತ್ತರ ನೀಡಿದೆವು, ಅಪ್ರಚೋದಿತ ಶೆಲ್ ದಾಳಿಗೆ ಉತ್ತರವಾಗಿ ನಾವು ನಡೆಸಿದ ಅಟ್ಯಾಕ್ ಗೆ ಎಲ್ಇಟಿ ಸಂಘನೆಯ ಲಾಂಚ್ ಪ್ಯಾಡ್ ಛಿದ್ರವಾಯ್ತು ಎಂದಿದ್ದಾರೆ,
ಪಾಕಿಸ್ತಾನಕ್ಕೆ ಹತ್ತಿರ ಎಂಬಂತೆ ಅಂತಾರಾಷ್ಟ್ರೀಯ ಬಾರ್ಡರ್ ನ ಲೂನಿ ಪ್ರದೇಶವನ್ನು ಗುರಿಯಾಗಿಸಿ ಭಾರತೀಯ ಸೇನೆ ದಾಳಿ ಮಾಡಿತು, ನಾವು ಏನು ಅಂದುಕೊಂಡಿದ್ದೆವೋ ಅದೆಲ್ಲವೂ ಈಡೇರಿತು ಎಂದು ಶಶಾಂಕ್ ಹೇಳಿದ್ದಾರೆ,