ಶ್ರೀ ಕೆ. ರಂಗನಾಥ್.ರವರಿಗೆ ಉರಗ ಸಂರಕ್ಷಣೆಗಾಗಿ ಗೌರವ ಡಾಕ್ಟರೇಟ್ ಪದವಿ

varthajala
0

ಸಾಧನೆ ಮಾಡಲು ಹಲವು ದಾರಿಗಳು ಇರುವುವು ಅನ್ನೋದಕ್ಕೆ ನಮ್ಮ ಸಂಸ್ಥೆಯ ಘಟಕ-35 ರಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಉರಗ(ಹಾವು) ಸಂರಕ್ಷಕ ರಾದ ಶ್ರೀ ರಂಗನಾಥ್ ಕೆ.,  ಚಾಲಕ, ಬಿಲ್ಲೆ ಸಂಖ್ಯೆ 20997 ರವರೆ ಸಾಕ್ಷಿಯಾಗಿದ್ದಾರೆ. ಕಳೆದ 14 ವರ್ಷಗಳಿಂದ ಬೆಂ.ಮ.ಸಾ.ಸಂಸ್ಥೆಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಕರ್ತವ್ಯದ ನಂತರದ ಬಿಡುವಿನ ವೇಳೆಯಲ್ಲಿ ಸಾರ್ವಜನಿಕರ ಕೋರಿಕೆಯ ಮೇರೆಗೆ ಯಾವುದೇ ಸಮಯದಲ್ಲಿಯೂ ಕರೆದರೂ ಮನೆ, ಕಛೇರಿಗಳಲ್ಲಿ ಕಂಡು ಬರುವ ಉರಗ (ಹಾವು) ಗಳನ್ನು ಸಕಾಲದಲ್ಲಿ ಹಿಡಿದು ಸಂರಕ್ಷಿಸಿದ್ದಾರೆ ಹಾಗೂ ಹಾವುಗಳು ಎಂದರೆ ಭಯಪಡುವವರಿಗೆ ಅವುಗಳ ಕುರಿತು ತಿಳಿವಳಿಕೆ ನೀಡಿ, ದೈರ್ಯ ತುಂಬುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವರು. 

ಶ್ರೀರಂಗನಾಥ್ ಕೆ. ರವರು ಚಿಕ್ಕಂದಿನಿಂದಲೇ ಹಾವು (ಉರಗ) ಹಿಡಿಯುವ ಕಲೆಯನ್ನು ಕಲಿತ ಇವರು  ಕಳೆದ 30 ವರ್ಷಗಳಿಂದ ಸಾರ್ವಜನಿಕರ ಕೋರಿಕೆಯಂತೆ ಸುಮಾರು 4552 ವಿವಿಧ ಜಾತಿಯ ವಿಷಪೂರಿತ ಉರಗಗಳನ್ನು ಸಂರಕ್ಷಿಸಿದ್ದಾರೆ. ಇವರ ಸಾರ್ವಜನಿಕ ಕಳಕಳಿ ಹಾಗೂ ಹಾವುಗಳನ್ನು ಹಿಡಿದು ಸಂರಕ್ಷಿಸಿರುವುದನ್ನು ಗುರುತಿಸಿ, ವಿವಿಧ ಸಂಘ ಸಂಸ್ಥೆಗಳಿಂದ ಕನ್ನಡ ಸೇವಾ ರತ್ನ ಪ್ರಶಸ್ತಿ ಪತ್ರ , ಕನ್ನಡ ಫಿಲಂ ಚೇಂಬರ್(ರಿ) ರವರು   ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದು,  ಹೀಗೆ ಒಟ್ಟು 14 ಪ್ರಶಸ್ತಿಗಳು ಇವರಿಗೆ ಲಭಿಸಿವೆ.   

ಸಾಧನೆ ಮಾಡುವವರನ್ನು ಪ್ರಶಸ್ತಿಗಳೇ ಹುಡುಕಿಕೊಂಡು ಬರುವಂತೆ ಇವರ ಉರಗುಗಳ ಸಂರಕ್ಷಣೆಯನ್ನು ಗುರುತಿಸಿ, ಏಷಿಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯುನಿವರ್ಸಿಟಿಯವರು(ಐ.ಎ.ಓ) ಸ್ನೇಕ್ ಹ್ಯಾಂಡಲಿಂಗ್ ಸ್ಕಿಲ್ ಸರ್ವಿಸ್ಗಾಗಿ “ಹಾನರರಿ ಡಾಕ್ಟರೇಟ್ ಅವಾರ್ಡ್” ನ್ನು ದಿನಾಂಕ 30.09.2023 ರಂದು ನೀಡಿರುತ್ತಾರೆ. 

ಇವರ ಕಾರ್ಯ ಸಾಧನೆಗೆ ಮತ್ತೊಂದು ಗರಿಯಂತೆ ದಿನಾಂಕ 19.05.2025 ರಂದು ಮಲೇಷಿಯಾದಲ್ಲಿರುವ ಅಮೇರಿಕನ್ ವಿಸ್ಡಮ್ ಪೀಸ್ ಯುನಿವರ್ಸಿಟಿ ರವರು ಸ್ನೇಕ್ ಹ್ಯಾಂಡಲಿಂಗ್ ಸ್ಕಿಲ್ ಟ್ರೇನರ್ & ಸೊಸಿಯಲ್ ಸರ್ವೀಸ್ ಸಂಬಂಧವಾಗಿ “ಗೌರವ ಡಾಕ್ಟರೇಟ್” ಪದವಿ ನೀಡಿ ಗೌರವಿಸಿರುವರು. ಇವರ ಸಾಧನೆ ಹಾಗೂ ಸಾಮಾಜಿಕ ಕಾರ್ಯವು ಹೀಗೆ ಮುಂದುವರೆದು ಸಮಾಜಕ್ಕೆ ಸಹಾಯವಾಗುವುದರ ಜೊತೆ ಸಂಸ್ಥೆಗೂ ಕೀರ್ತಿ ತರಲೆಂದು ಮಾನ್ಯ ವ್ಯವಸ್ಥಾಪಕ ನಿರ್ದೇಶಕರು ಶುಭ ಕೋರಿರುವರು.

Post a Comment

0Comments

Post a Comment (0)