ಬಂಜಾರ ಸಾಹಿತ್ಯ, ಕಾವ್ಯ ಹಾಗೂ ನಾಟಕ ರಚನಾ ವಸತಿ ತರಬೇತಿ ಕಮ್ಮಟ ಸಂಪನ್ನ

varthajala
0

 ಬೆಂಗಳೂರು, ಜುಲೈ 08 (ಕರ್ನಾಟಕ ವಾರ್ತೆ) : ಬಂಜಾರ ಸಂಸ್ಕತಿ ಮತ್ತು ಭಾಷಾ ಅಕಾಡೆಮಿ, ಸಾಹಿತ್ಯ ಸಂಸ್ಕøತಿ ವೇದಿಕೆ, ಅಗರ ಹಾಗೂ ಪ್ರಜಾಕಿರಣ ಸೇವಾ ಚಾರಿಟೆಬಲ್ ಟ್ರಸ್ಟ್ ಆಶ್ರಮದ ವತಿಯಿಂದ ಬೆಂಗಳೂರು ದಕ್ಷಿಣ ತಾಲೂಕಿನ ಅಗರದಲ್ಲಿರುವ ಆರ್. ಸದಾಶಿವಯ್ಯ ಮಂಟಪದಲ್ಲಿ 2025 ರ ಜೂನ್ 15 ರಿಂದ ಜುಲೈ 4 ರವರೆಗೆ 20 ದಿನಗಳ ಬಂಜಾರ ಸಾಹಿತ್ಯ, ಕಾವ್ಯ ಹಾಗೂ ನಾಟಕ ರಚನಾ ವಸತಿ ತರಬೇತಿ ಕಮ್ಮಟ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಸಮಾರೋಪ ಸಮಾರಂಭದಲ್ಲಿ ಬಂಜಾರ ಸಂಸ್ಕøತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷರಾದ ಡಾ.ಎ.ಆರ್.ಗೋವಿಂದಸ್ವಾಮಿ ಅವರು ಮಾತನಾಡಿ, ಕಲೆ, ಸಾಹಿತ್ಯ, ಸಂಸ್ಕøತಿಯ ಒಳಗೊಳ್ಳುವಿಕೆ ವ್ಯಕ್ತಿತ್ವ ವಿಕಾಸಕ್ಕೆ ಪೂರಕ. ಹೀಗಾಗಿಯೇ ಸರ್ಕಾರಗಳು ಅಕಾಡೆಮಿಗಳ ಮೂಲಕ ಇಂತಹ ಚಟುವಟಿಕೆ ನಡೆಸುತ್ತಾ ಬಂದಿವೆ. ಅಶ್ರಮದಲ್ಲಿ ಬಂಜಾರ ಒಳಗೊಂಡಂತೆ ಎಲ್ಲಾ ಮಕ್ಕಳು ಸದುಪಯೋಗ ಪಡೆದಿದ್ದಾರೆ ಎಂದರು.
ಬಂಜಾರ ಆರ್ಥಿಕ ಸ್ಥಿತಿ ಇಂದಿಗೂ ಹೀನಾಯವಾಗಿದೆ. ಬಂಜಾರರು ಅನೇಕ ಪ್ರಥಮಗಳನ್ನು ಈ ದೇಶಕ್ಕೆ ಕೊಟ್ಟಿದ್ದಾರೆ. ಬಂಜಾರರು ಮೊದಲ ವ್ಯಾಪರಿಗಳು, ಮೊದಲ ಕೃಷಿಕರು, ಮೊದಲ ಲಿಕ್ಕರ್ ತಯಾರಕರು,  ವಿಶ್ವಕ್ಕೆ ಮೊದಲು ವರ್ಣಮಯ ರಂಚನೆಯನ್ನು ಕೊಟ್ಟವರು - ಆಶಂ ಕಲಾವಿದರು, ಮೊದಲ ಗೆರಿಲ್ಲಾ ಯುದ್ದಾ ಕಲಿಸಿದ ಅರಣ್ಯವಾಸಿಗಲು, ಮೊದಲ ಗೋಪಾಲಕರು/ ಗೊ ಶಾಲೆ ಕೊಟ್ಟವರು, ಮೊದಲು ಕಸೂತಿ ಪ್ಯಾಷನ್ ಟೆಕ್ನಾಲಜಿ ಕೊಟ್ಟವರು, ಮೊದಲ ಆರ್ಥಿಕತೆ ತಿಳಿದವರು, ಮೊದಲ ರಸ್ತೆ ನಿರ್ಮಾಪಕರು, ಮೊದಲ ಪಶು-ಪ್ರಾಣಿಗಳ ರಕ್ಷಕರು, ಮೊದಲ ಬೇಟೆಗಾರರು, ಮೊದಲು ಪ್ರಸಾದನ, ಕಸೂತಿ ಕೌಶಲ್ಯ ಕಲಿಸಿದ ಸುಂದರಿಯರು.
ದಕ್ಷಿಣ ಭಾರತ, ಕರ್ನಾಟಕ, ಆಂಧ್ರಪ್ರದೇಶ ಮುಂತಾದ ಕಡೆ ಬಂಜಾರರು ಹಸಿವಿಗಾಗಿ ಮಕ್ಕಳನ್ನು ಮಾರಿಕೊಂಡ ಪ್ರಕರಣಗಳು ಬೆಳಕಿಗೆ ಬಂದಿವೆ. ತನಿಖೆ ಸಹ ಆಗಿದೆ. ಮಾನವ ಮಾರಾಟ ದಂಧೆಯಾಗಿದೆ. ಈ ಹಿನ್ನಲೆಯಲ್ಲಿ ಅರಿವು ಜಾಗೃತಿಗಾಗಿ ಬಂಜಾರ ಅಕಾಡೆಮಿ ಆಯೋಜಿಸಿದ 20 ದಿನಗಳ ಶಿಬಿರದಲ್ಲಿ ಬಂಜಾರ ಮಕ್ಕಳ ಮಾರಾಟ, ಬದುಕು, ಬವಣೆ ಕುರಿತು ಸತ್ಯ ಹರಿಶ್ಚಂದ್ರ ಶುನಶೇಫರ ಕಥೆ ಸಮ್ಮಿಲನಗೊಳಿಸಿ ಜಿ. ನಾಯಕ್  ಅವರು ಶಿಬಿರದಲ್ಲಿ ರಚಿಸಿದ “ಬಂಜಾರ ಬದುಕು ಬವಣೆ” ಪ್ರದರ್ಶಿಸಲಾಯಿತು. ಇಲ್ಲಿ ಒಟ್ಟು ಎರಡು ನಾಟಕ, ಹಲವಾರು ಕಾವ್ಯ, ಲೇಖನಗಳು ಬರೆಯಲಾಗಿದೆ ಎಂದರು.
ಹೆಸರಾಂತ ಕವಿ ಹಾಗೂ ಸಾಂಸ್ಕøತಿಕ ಚಿಂತಕರಾದ ಡಾ. ವಡ್ಡಗೆರೆ ನಾಗರಾಜಯ್ಯ ಅವರು ಮಾತನಾಡಿ, ಯಶಸ್ವಿಯಾದ ಈ ಶಿಬಿರದ ನಾಟಕ ಪ್ರದರ್ಶನದಲ್ಲಿ ಸಣ್ಣ ಮಕ್ಕಳು ದೊಡ್ಡ ದೊಡ್ಡ ಸಂಭಾಷಣೆಗಳನ್ನು ನೆನಪಿನಲ್ಲಿ ಇಟ್ಟುಕೊಂಡು ಅಷ್ಟೊಂದು  ಚೆನ್ನಾಗಿ ನುರಿತ ಕಲಾವಿದರಂತೆ  ಶ್ರದ್ದೆಯಿಂದ ಅವರು ರಂಗಮಂಚದ ಮೇಲೆ ಪ್ರದರ್ಶನ ಮಾಡಿದರು ಎಂದು ಮಕ್ಕಳಿಗೆ ಅಭಿನಂದನೆ ತಿಳಿಸಿದರು. ಹಾಗೆಯೇ ಬಂಜಾರ ಸಂಸ್ಕøತಿ, ಪರಂಪರೆ, ಸೇವಾಲಾಲ್ ಬಗ್ಗೆ ಕವಿತೆಗಳನ್ನು ಶಿಬಿರಾರ್ಥಿಗಳು ವಾಚನ ಮಾಡಿದರು.
ಡಾ.ಎ.ಆರ್.ಗೋವಿಂದಸ್ವಾಮಿ ಮತ್ತು ನಾನು ಕಳೆದ 30 ವರ್ಷಗಳಿಗಿಂತಲೂ ಹಿಂದಿನಿಂದ ಗೆಳೆಯರು, ಜೊತೆಯಲ್ಲಿಯೇ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಓದಿದವರು ಸಾಹಿತ್ಯ ಇತರೆ ವಿಷಯಗಳನ್ನು ಸಂಘಟಿಸಿದವರು, ಸಾಮಾಜಿಕ ಚಳುವಳಿಗಳನ್ನು ಅಲೆಮಾರಿಗಳ ಸಬಲಿಕರಣಕ್ಕಾಗಿ ಸಂಘಟನೆಗಳತ್ತ ಜೊತೆಗೂಡಿ ನಡೆಯುತ್ತಾ ಬಂದಿದ್ದೇವೆ. ಆ ಕಾಲದಿಂದಲೂ ಕೂಡ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡವರು ಹೀಗಾಗಿ, ಅವರನ್ನು ಕರ್ನಾಟಕ ಸರ್ಕಾರ ಗುರುತಿಸಿ ಬಂಜಾರ ಸಂಸ್ಕøತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷರನ್ನಾಗಿ ನೇಮಿಸಿದೆ. ಅವರು ಇನ್ನಷ್ಟು ವಿಸ್ತರಿಸಿಕೊಳ್ಳಲು ಹಾಗೂ ಅವರ ಸೃಜನಶೀಲತೆಯನ್ನು ಸಮಾಜಕ್ಕೆ ಧಾರೆಯರೆಯುವುದಕ್ಕೆ ಇದು ಒಂದು ಒಳ್ಳೆಯ ಸದಾವಕಾಶ ಎಂದು ಹೇಳಿದರು.
ಅಗರ ಸಾಹಿತ್ಯ ಸಂಸ್ಕøತಿ ವೇದಿಕೆಯ ಅಧ್ಯಕ್ಷರಾದ ಆರ್.ಸದಾಶಿವಯ್ಯ ಜರಗನಹಳ್ಳಿ ಮಾತನಾಡಿ, ಬಂಜಾರ ಅಕಾಡೆಮಿ ನಮ್ಮ ಸಂಸ್ಥೆಯ ಸಹಯೋಗದಲ್ಲಿ ಒಂದು ಉತ್ತಮವಾದ ವಸತಿ ಕಾರ್ಯಾಗಾರ ಕೊಟ್ಟು ಪ್ರಚಾಕಿರಣ ಸೇವಾಶ್ರಮದ ಮಕ್ಕಳನ್ನೂ ಶಿಬಿರಕ್ಕೆ ಸೇರಿಸಿಕೊಂಡು ಮಕ್ಕಳ ಮಾರಾಟದ ಬಗ್ಗೆ ನಾಟಕ ಚಲನ .ಜಿ ನಾಯಕ ರಚಿಸಿ ಛಾಯಾ ಭಾರ್ಗವಿ ನಿರ್ದೇಶನದಲ್ಲಿ ಚೆನ್ನಾಗಿ ಪ್ರದರ್ಶನಗೊಂಡಿದೆ ಎಂದರು.
ಇದೇ ಸಂದರ್ಭದಲ್ಲಿ “ಬಂಜಾರ ಬದುಕು ಮತ್ತು ಬವಣೆ” ಕುರಿತು ನಾಟಕ ಪ್ರದರ್ಶನ ಹಾಗೂ ಶಿಬಿರದ ಶಿಬಿರಾರ್ಥಿಗಳು ಶಿಬಿರದಲ್ಲಿ ಕವಿತೆಗಳ ವಾಚನ ಮಾಡಲಾಯಿತು.
ಮಹಾರಾಣಿ ಕಾಲೇಜು ಪ್ರಾಧ್ಯಾಪಕರಾದ ಡಾ. ಕೃಷ್ಣ ನಾಯಕ್, ಸಾಹಿತ್ಯ ಸಂಸ್ಕøತಿ ವೇದಿಕೆ, ಅಗರ ಅಧ್ಯಕ್ಷರಾದ ಆರ್.ಸದಾಶಿವಯ್ಯ ಜರಗನಹಳ್ಳಿ, ಪ್ರಜಾ ಕಿರಣ ಸೇವಾ ಚಾರಿಟೇಬಲ್ ಟ್ರಸ್ಟ್‍ನ ಸಂಪನ್ಮೂಲ ವ್ಯಕ್ತಿಗಳು ಹಾಗೂ ಅಧ್ಯಕ್ಷರಾದ ಡಾ.ರಾಹುಲ್ ಗಾಳಿ, ಶ್ರೀಮತಿ ಛಾಯಾ ಭಾರ್ಗವಿ. ಎಸ್.ಎಚ್, ಮಾಲತೇಶ ಬಡಿಗೇರ, ಬಂಜಾರ ಅಕಾಡೆಮಿ ಸದಸ್ಯರಾದ ಡಾ. ಉತ್ತಮ್, ಗಿರೀಶ್ ನಾಯಕ್ ಉಪಸ್ಥಿತರಿದ್ದರು.

Post a Comment

0Comments

Post a Comment (0)