ಹಾಸನದಲ್ಲಿ ಯಶಸ್ವಿ ಪ್ರಯೋಗ ಸತ್ಯ ಹರಿಶ್ಚಂದ್ರ ನಾಟಕ

varthajala
0

ಹಾಸನದ ಶ್ರೀ ಲಕ್ಷಿö್ಮÃ ವೆಂಕಟೇಶ್ವರ ಸಾಂಸ್ಕೃತಿಕ ಕಲಾಸಂಘದ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಹಾಸನಾಂಬ ಕೃಪಾಪೋಷಿತ ನಾಟಕ ಮಂಡಳಿಯ ಕಲಾವಿದರು ದೊಡ್ಡಘಟ್ಟ ಬೆಳ್ಳೂರು ಕ್ರಾಸ್ ಮಂಜುನಾಥ್ ಅವರ ನಿರ್ದೇಶನದಲ್ಲಿ ಭಾನುವಾರ ಹಾಸನಾಂಬ ಕಲಾಕ್ಷೇತ್ರದಲ್ಲಿ ಸತ್ಯ ಹರಿಶ್ಚಂದ್ರ ನಾಟಕ ಪ್ರದರ್ಶಿಸಿದರು. 

ವೇದಿಕೆಯಲ್ಲಿ ಸಾಹಿತಿ ಗೊರೂರು ಅನಂತರಾಜು ಮಾತನಾಡಿ ಸತ್ಯಕ್ಕೆ ಜಯ ಎಂಬ ಉದಾತ್ತ ಸಂದೇಶ ಸಾರುವ ನಾಟಕ ಸತ್ಯ ಹರಿಶ್ಚಂದ್ರ.ಮಹಾತ್ಮ ಗಾಂಧೀಜಿಯವರು ಹರಿಶ್ಚಂದ್ರ ನಾಟಕವನ್ನು ಎಷ್ಟು ಸಾರಿ ನೋಡಿದರೂ ನನಗೆ ತೃಪ್ತಿಯೇ ಆಗಲಿಲ್ಲ. ಹರಿಶ್ಚಂದ್ರ ಸತ್ಯಕ್ಕಾಗಿ ಪಟ್ಟ ಕ್ಲೇಶವನ್ನೆಲ್ಲ, ಆಪತ್ತುಗಳನ್ನೆಲ್ಲ ನಾನೂ ಪಡಬೇಕು. ಇದೊಂದೆ ನನ್ನ ಮನಸ್ಸಿನಲ್ಲಿ ಸ್ಫೂರ್ತಿ ತುಂಬಿದ ಅದರ್ಶ ಎಂದು ತಮ್ಮ ಆತ್ಮಕಥೆಯಲ್ಲಿ ಹೇಳಿದ್ದಾರೆ. ಗಾಂಧೀಜಿಯವರ ಮೇಲೆ ಪ್ರಭಾವ ಬೀರಿದ ಸತ್ಯ ಹರಿಶ್ಚಂದ್ರ ನಾಟಕವನ್ನು ಕಲಾವಿದರು ಆಸಕ್ತಿಯಿಂದ ಕಲಿತು ಪ್ರದರ್ಶಿಸುತ್ತಿರುವುದು ಮೆಚ್ಚುಗೆಯ ವಿಶೇಷ. ಇಲ್ಲಿ ಹೆಚ್ಚಾಗಿ ಕುರುಕ್ಷೇತ್ರ, ರಾಮಾಯಣ ನಾಟಕಗಳೇ  ಪ್ರಧಾನವಾಗಿ ಪ್ರದರ್ಶಿತವಾಗುತ್ತಿರುವಲ್ಲಿ ಹೊಸ ಹೊಸ ನಾಟಕಗಳು ರಂಗದ ಮೇಲೆ ಬರಬೇಕು. ಕಂಪನಿ ನಾಟಕ ಸತ್ಯ ಹರಿಶ್ಚಂದ್ರ ಬಹಳ ಹಿಂದೆಯೇ ಸಿನಿಮಾವಾಗಿ ಜನಪ್ರಿಯವಾಗಿದೆ. ಇಂತಹ ಹಲವಾರು ಕಂಪನಿ ನಾಟಕಗಳು ಇದ್ದು ಅವುಗಳನ್ನು ರಂಗದ ಮೇಲೆ ತರುವಲ್ಲಿ ಕಲಾತಂಡಗಳು ಗಮನ ಹರಿಸಲೆಂದು ಆಶಿಸಿದರು. ಹಾಸನ ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿ ಅಧ್ಯಕ್ಷ ರವಿಕುಮಾರ್ ಬಿದರೆ ಮಾತನಾಡಿ ಕಲಾಭವನದಲ್ಲಿ ಸತ್ಯ ಹರಿಶ್ಚಂದ್ರ ಪ್ರಥಮ ಬಾರಿ ಪ್ರದರ್ಶಿತವಾಗುತ್ತಿದೆ. ಮುಂದೆಯೂ ಬೇರೆ ಬೇರೆ ಪೌರಾಣಿಕ ನಾಟಕಗಳು ರಂಗದ ಮೇಲೆ ತರಲು ಕಲಾತಂಡಗಳಿಗೆ ಪ್ರೇರಣೆಯಾಗಲಿ ಎಂದರು. ಸಂಘದ ಅಧ್ಯಕ್ಷರು ಹೆಚ್.ವಿ.ಆನಂದ್, ಗೌ.ಅಧ್ಯಕ್ಷಕರು ಕೆ.ಪಿ.ರಾಮಾಚಾರ್, ಉಪಾಧ್ಯಕ್ಷರು ಪ್ರದೀಪ್, ರಂಗಭೂಮಿ ಕಲಾವಿದರು ಕಲ್ಲಯ್ಯ (ಕುಶಾಲ್), ಕೆ.ಹಿರಿಹಳ್ಳಿ ರವಿ, ಚಂದ್ರಶೇಖರ್ ಸಿಗರನಹಳ್ಳಿ, ವೈಭವ್ ವೆಂಕಟೇಶ್, ನಾಗಮೋಹನ್, ಸಾಣೇನಹಳ್ಳಿ ಸೋಮಶೇಖರ್, ಆನಂದಕುಮಾರ್ ಹೆಚ್.ಕೆ. ಮೊದಲಾದವರು ಇದ್ದರು. ಪ್ರಕಾಶ್ ಬಿ.ಆರ್. ತಟ್ಟೇಕೆರೆ ಕಾರ್ಯಕ್ರಮ ನಿರೂಪಿಸಿದರು. ನಂಜಪ ಪೊಲೀಸ್ ಪ್ರಾರ್ಥಿಸಿದರು. ನಾಟಕದಲ್ಲಿ ಹರಿಶ್ಚಂದ್ರನ ಪಾತ್ರಕ್ಕೆ ಜಯಕುಮಾರ್ ನ್ಯಾಯ ಒದಗಿಸಿದರು. ಈರಯ್ಯ ಎನ್.ಸಿ. ನಾರದನಾಗಿ ಹಾಡುಗರಿಕೆಯಲ್ಲಿ ರಂಜಿಸಿದರು. ದೇವೇಂದ್ರನ ಪಾತ್ರದಲ್ಲಿ ರುದ್ರೇಶ್ ಟಿ.ಎಸ್. ವಶಿಷ್ಠರ ಪಾತ್ರದಲ್ಲಿ ಶಿವಕುಮಾರ್. ಮಂತ್ರಿ ಸತ್ಯಕೀರ್ತಿ ಪಾತ್ರದಲ್ಲಿ ತಿಮ್ಮಪರವರ ಮಾತುಗಳು ಸ್ಫಷ್ಟವಾಗಿ ಅಭಿನಯ. 


Post a Comment

0Comments

Post a Comment (0)