ಬೆಂಗಳೂರು : ಸದನದ ಕಲಾಪವನ್ನು ವೀಕ್ಷಿಸಲು ವಿಶೇಷಚೇತನ ಮಕ್ಕಳಿಗೆ ಸಂಜ್ಞಾ ಭಾμÉಯಲ್ಲಿ ಸದನದ ಕಲಾಪವನ್ನು ಅರ್ಥ ಮಾಡಿಸಲು ವ್ಯವಸ್ಥೆ ಮಾಡಲಾಗುವುದು ಎಂದು ವಿಧಾನಸಭೆಯ ಸಭಾಧ್ಯಕ್ಷ ಯು.ಟಿ ಖಾದರ್ ವಿಧಾನಸಭೆಯಲ್ಲಿ ತಿಳಿಸಿದರು.
ಸಕಲೇಶಪುರದ ಎಂ.ಕೆ. ಗಣಪಯ್ಯ ಕಿವುಡ ಮತ್ತು ಮೂಕ ಶಾಲೆಯ ಮಕ್ಕಳು ಇಂದು ವಿಧಾನಸಭೆಯ ಕಲಾಪವನ್ನು ವೀಕ್ಷಿಸಲು ಆಗಮಿಸುತ್ತಾರೆ. ಈ ಮಕ್ಕಳಿಗೆ ಸದನದಲ್ಲಿ ಶುಭಾಶಯ ಕೋರಿ ಇನ್ನು ಮುಂದಿನ ದಿನಗಳಲ್ಲಿ ಇಂತಹ ಮಕ್ಕಳಿಗೆ ಸಂಜ್ಞಾ ಭಾμÉಯ ಮೂಲಕ ಕಲಾಪದ ವಿವರಗಳನ್ನು ಅರ್ಥ ಮಾಡಿಸಲು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.