ಶ್ರೀ ನರಸಿಂಹ ಜಯಂತಿ ಮತ್ತು ಶ್ರೀ ಶ್ಯಾಮಸುಂದರದಾಸರ ಆರಾಧನೆ

varthajala
0

ಬೆಂಗಳೂರು : ಶ್ರೀ  ಶ್ರೀಪಾದರಾಜ ಮಠಾಧೀಶರಾದ  ಪರಮಪೂಜ್ಯ ಶ್ರೀ ಶ್ರೀ 1008 ಶ್ರೀ ಸುಜಯೀಂದ್ರತೀರ್ಥ ಶ್ರೀಪಾದಂಗಳವರ ಅನುಗ್ರಹದೊಂದಿಗೆ ದಾಸವಾಣಿ ಕರ್ನಾಟಕ ಸಂಸ್ಥೆ ವತಿಯಿಂದ ಮೇ 10 ರಂದು ರಾಘವೇಂದ್ರ ಕಾಲೋನಿಯ ಶ್ರೀ ಶ್ರೀಪಾದರಾಜರ ಮಠದಲ್ಲಿ ಶ್ರೀ ಶ್ಯಾಮಸುಂದರದಾಸರ ಆರಾಧನೆ ಮತ್ತು ನರಸಿಂಹ ಜಯಂತಿಯನ್ನು ಆಚರಿಸಲಾಯಿತು.

 ದಾಸವಾಣಿ ಕರ್ನಾಟಕದ ಸಂಸ್ಥಾಪಕರಾದ ಶ್ರೀ ಜಯರಾಜ ಕುಲಕರ್ಣಿ ಮತ್ತು ಶ್ರೀ ಶ್ಯಾಮಸುಂದರದಾಸರ ಮರಿಮಗಳಾದ ಶ್ರೀಮತಿ ಮಾನಸ ಕುಲಕರ್ಣಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಾಸವಾಣಿ ಕರ್ನಾಟಕ ಮತ್ತು ಸ್ವರಾತ್ಮಿಕ ಸಂಗೀತ ವೃಂದದವರಿಂದ ಶ್ರೀ ಶ್ಯಾಮಸುಂದರದಾಸರ ಅನೇಕ ಕೃತಿಗಳ ಗಾಯನ ಸೇವೆ ನಡೆಯಿತು. 

ಇದೇ ಸಂದರ್ಭದಲ್ಲಿ ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್ ನ ಅಧ್ಯಕ್ಷರಾದ ಡಾ|| ಸುಧಾ ದೇಶಪಾಂಡೆ ಮತ್ತು ಪ್ರಧಾನ ಕಾರ್ಯದರ್ಶಿ ಡಾ|| ವೃಂದಾ ಸಂಗಮ್ ಅವರು ಶ್ರೀ ಶ್ಯಾಮಸುಂದರ ದಾಸರ ಜೀವನ ಚರಿತ್ರೆ ಮತ್ತು ಅವರ ಕೃತಿಗಳ ವಿಶೇಷತೆ ಬಗ್ಗೆ ತಿಳಿಸಿಕೊಟ್ಟರು. 

ಶ್ರೀ ಶ್ಯಾಮಸುಂದರದಾಸರು ವರಕವಿ ದ. ರಾ. ಬೇಂದ್ರೆ ಅವರಿಗೆ ಮಾನವಿಯಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ಬರಲು ಅವರಿಗೆ ಬರೆದ ವಿಶೇಷ ಪತ್ರವನ್ನು ಸಂಸ್ಕೃತಿ ಚಿಂತಕರಾದ ಡಾ|| ಗುರುರಾಜ್ ಪೊಶೆಟ್ಟಿಹಳ್ಳಿ ಅವರು ಓದಿದರು. ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಉಪಸ್ಥಿತರಿದ್ದರು.

Post a Comment

0Comments

Post a Comment (0)