ರಾಮ ರಾಜ್ಯ ಕಟ್ಟುವ ಗಾಂಧೀಜಿಯವರ ಕನಸು ನನಸು ಮಾಡುವಲ್ಲಿ ನೀತಿ ಮತ್ತು ಯೋಜನಾ ಆಯೋಗ ಸಹಕಾರಿಯಾಗಿದೆ - ಬಿ.ಆರ್.ಪಾಟೀಲ್

varthajala
0

 ಬೆಂಗಳೂರು : ನೀತಿ ಮತ್ತು ಯೋಜನಾ ಆಯೋಗದ ಪರಿಕಲ್ಪನೆಯು ಪಂಡಿತ್ ಜವಾಹರ ಲಾಲ್ ನೆಹರೂ ಅವರದಾಗಿತ್ತು. ಸುಭಾμï ಚಂದ್ರ ಭೋಸ್ ಅವರು ಇದಕ್ಕೆ ರೂಪುರೇಷೆÉಯನ್ನು ನೀಡಿದರು. ಈ ಆಯೋಗವು ರಾಮ ರಾಜ್ಯ ಕಟ್ಟುವ ಗಾಂಧಿ ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಸಹಕಾರಿಯಾಗಿದೆ ಎಂದು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರಾದ ಬಿ.ಆರ್.ಪಾಟೀಲ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. 

ಇಂದು ಗಾಂಧಿಭವನದಲ್ಲಿ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ವತಿಯಿಂದ “ಅಗತ್ಯ ಪುರಾವೆ ಮತ್ತು ಫಲಿತಾಂಶ ಆಧಾರಿತ ನೀತಿ ಮತ್ತು ಯೋಜನೆ” ಎಂಬ ವಿಷಯದಲ್ಲಿ ಏರ್ಪಡಿಸಲಾಗಿದ್ದ ಒಂದು ದಿನದ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಯೋಗವು ಬಹಳ ವ್ಯವಸ್ಥಿತವಾಗಿ, ನಿಯಮ ಬದ್ಧವಾಗಿ ಎಲ್ಲಾ ರಾಜ್ಯಗಳನ್ನು ಒಳಗೊಂಡು ಕೆಲಸ ಮಾಡುತ್ತಿತ್ತು. ಆದರೆ ಕೇಂದ್ರ ಸರ್ಕಾರದ ನಿಲುವಿನಲ್ಲಿ ಬದಲಾವಣಿಯಾದ ಮೇಲೆ ನೆಹರು ಅವರ ಕಾಲಕ್ಕೆ ಇದ್ದ ಮಹತ್ವ ಇಂದು ಉಳಿದಿಲ್ಲದಿರುವುದು ನಮ್ಮ ದುರ್ದೈವವಾಗಿದೆ ಎಂದರು. ಈ ಹಿಂದಿನ ಅಧ್ಯಕ್ಷರುಗಳು ಉತ್ತಮ ಯೋಜನೆಗಳನ್ನು ರೂಪಿಸಲು ಸಾಕಷ್ಟು ಶ್ರಮವಹಿಸಿದ್ದಾರೆ. ಆದರೆ ಈ ಬಾರಿ ನಾವು ಯೋಜನೆಗಳನ್ನು ರೂಪಿಸುವಲ್ಲಿ ಒಂದು ಹಂತಕ್ಕೆ ಮುಟ್ಟುವ ಪ್ರಯತ್ನ ಮಾಡಿದ್ದರೂ ಕೂಡ ನೂರಕ್ಕೆ ನೂರು ಸಂಪೂರ್ಣವಾಗಿ ಯಶಸ್ಸು ಹೊಂದಲು ಸಾಧ್ಯವಾಗಿಲ್ಲದಿರುವುದು ನೋವಿನ ಸಂಗತಿಯಾಗಿದೆ.
ಅದಕ್ಕೆ ಕಾರಣ ಯೋಜನಾ ಆಯೋಗವನ್ನೇ ಸಂಪೂರ್ಣವಾಗಿ ಅಧಿಕಾರಿಗಳು ಮತ್ತು ರಾಜಕಾರಣಿಗಳು ಮರೆತಿದ್ದಾರೆ ಎಂದು ವಿμÁದಿಸಿದರು. ಹಣ ಖರ್ಚಾಗುವಂತಹ ಯಾವುದೇ ಸರ್ಕಾರದ ಕಾರ್ಯಕ್ರಮಗಳನ್ನು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸಲಹೆ ಸೂಚನೆ ಮೇರೆಗೆ ಮಾಡಿಕೊಳ್ಳದೇ ಬೇಕಾಬಿಟ್ಟಿಯಾಗಿ ಯೋಜನೆಗಳನ್ನು ಹಾಕಿಕೊಳ್ಳುವುದರಿಂದ ಹಣ ವ್ಯರ್ಥವಾಗಿ ಖರ್ಚಾಗುವುದಲ್ಲದೆ, ಜನರಿಗೂ ಕೂಡ ಉಪಯೋಗವಾಗುವುದಿಲ್ಲ. ಹಾಗಾಗಿ ಸರ್ಕಾರದ ಅನೇಕ ಯೋಜನೆಗಳು ವಿಫಲವಾಗುತ್ತಿವೆ. ಯಾವುದೇ ಯೋಜನೆಗಳನ್ನು ತರುವಾಗ ಪ್ರತಿಯೊಂದು ವಿಷಯವನ್ನು ಕೂಲಂಕುಶವಾಗಿ ಅಧ್ಯಯನ ಮಾಡದಿದ್ದರೆ ಅನವಶ್ಯಕವಾಗಿ ದುಂದು ವೆಚ್ಚವಾಗುತ್ತದೆ. ಕೆಲವು ಕಡೆ ಎμÉ್ಟೂೀ ಹಾಸ್ಟೆಲ್ ಗಳಲ್ಲಿ ಮಕ್ಕಳಿಲ್ಲದೆ ಕಟ್ಟಡಗಳು ಖಾಲಿಯಾಗಿವೆ. ವಾರ್ಡನ್ ಸೇರಿದಂತೆ ಸಿಬ್ಬಂದಿಯ ಸಂಬಳಕ್ಕಾಗಿ ನಡೆಸಲಾಗುತ್ತಿದೆ. ಈ ತರ ಅನೇಕ ವಲಯಗಳಲ್ಲಿ ಸರ್ಕಾರದ ಹಣ ವೆಚ್ಚವಾಗುತ್ತಿದೆ.

ತಳಮಟ್ಟದಿಂದ ಬಂದಿರುವ ಬೇಡಿಕೆಗಳನ್ನು ಈಡೇರಿಸಬೇಕೆಂಬ ಉದ್ದೇಶದಿಂದ ಜನವರಿ 25 ರೊಳಗಾಗಿ ಎಲ್ಲಾ ಜಿಲ್ಲಾಮಟ್ಟದ ಸಭೆಗಳ ವರದಿಯನ್ನು ತರಸಿಕೊಳ್ಳಲೇಬೇಕೆಂದು ನಿರ್ಧರಿಸಿದ್ದೇವೆ. ಸಮಯದ ಅಭಾವ ಇರುವ ಕಾರಣ ಈ ಬಾರಿಯ ಬಜೆಟ್ ಗೆ ನಮ್ಮ ಯೋಜನಾ ಆಯೋಗದಿಂದ ಸೂಚಿಸಿರುವ ಕೆಲವಾದರೂ ಡಿಪಿಸಿ ಗಳನ್ನು ಸೇರಿಸಬೇಕೆಂದು ತೀರ್ಮಾನಿಸಿ, ಶಿಕ್ಷಣ ಮತ್ತು ಕೌಶಲ್ಯ, ಆರೋಗ್ಯ, ಪೆÇೀಷಣೆ, ನೈರ್ಮಲ್ಯ, ನೀರು ಸರಬರಾಜು, ಪರಿಸರ, ಕೃಷಿ, ಮಹಿಳಾ ಮತ್ತು ಮಕ್ಕಳ, ಕಾರ್ಮಿಕ, ಸಮಾಜ ಕಲ್ಯಾಣ ಇಲಾಖೆಗಳಿಗೆ ಆದ್ಯತೆ ಕೊಟ್ಟು ಯೋಜನೆಗಳನ್ನು ಸೇರಿಸಲು ಪ್ರಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದರು. ಮುಖ್ಯಮಂತ್ರಿ ಅವರು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದಿಂದ ಬಂದಂತಹ ವರದಿಯನ್ನು ಬಜೆಟ್ ನಲ್ಲಿ ಅನುμÁ್ಠನಗೊಳಿಸುವುದಾಗಿ ಭರವಸೆಯನ್ನು ಕೊಟ್ಟಿದ್ದಾರೆ.
ಈ ಕಾರ್ಯಗಾರದ ಉದ್ಘಾಟನೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಿಹಿಸಿದ್ದ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್ ಅವರು ಮಾತನಾಡಿ, ಆಯವ್ಯಯದಲ್ಲಿ ನಿಗದಿ ಪಡಿಸುವ ಹಣ ಪರಿಣಾಮಕಾರಿಯಾಗಿ ಯೋಜನೆಗಳಲ್ಲಿ ಅನುμÁ್ಠನಗೊಳ್ಳಲು ಫಲಿತಾಂಶ ಆಧಾರಿತ ಯೋಜನೆಗಳನ್ನು ರೂಪಿಸುವುದು ಅತ್ಯಂತ ಅವಶ್ಯಕ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಗ್ರಾಮೀಣ ಭಾಗವಾಗಿರಬಹುದು ಅಥವಾ ನಗರ ಪ್ರದೇಶವಾಗಿರಬಹುದು, ನಾವು ಸ್ಥಳೀಯ ಜನರ ಬೇಡಿಕೆ ಅನುಗುಣವಾಗಿ ಯೋಜನೆ ಹಾಗೂ ಬಜೆಟ್ ರೂಪಿಸುವಾಗ ಎಲ್ಲಾ ಇಲಾಖೆಗಳ ಕಾರ್ಯಕ್ರಮಗಳನ್ನು ಕ್ರೋಢೀಕರಿಸಿ ಯೋಜನೆ ರೂಪಿಸುವುದಕ್ಕೆ ಆದ್ಯತೆ ನೀಡಬೇಕು.
ಗ್ರಾಮ, ತಾಲೂಕು, ಜಿಲ್ಲೆಗಳಲ್ಲಿನ ಸ್ವತ್ತುಗಳು ಹಾಗೂ ಸ್ಥಳೀಯ ಸಾಮಥ್ರ್ಯದ ಮೇಲೆ ಆದ್ಯತ ವಲಯವನ್ನು ಗುರುತಿಸಿ ಹಣವನ್ನು ವಿನಿಯೋಗ ಮಾಡಿದಾಗ ರಾಜ್ಯವು ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದಲಿದೆ ಎಂದರು. ಕರ್ನಾಟಕ ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಡಿ.ಆರ್. ಪಾಟೀಲ್ ಅವರು ಮಾತನಾಡಿ, ಈ ಬಾರಿಯ ಬಜೆಟ್ ಗೆ ಸಮಯದ ಅಭಾವ ಇರುವ ಕಾರಣ ಕೆಲವು ಇಲಾಖೆಗಳಿಗೆ ಮಾತ್ರ ಆದ್ಯತೆಯನ್ನು ನೀಡಿರುವುದರಿಂದ 2027-28 ನೇ ಯೋಜನೆಗಳಾದರೂ ಜನರ ಯೋಜನೆಗಳಾಗಿರಲಿ ಎಂದು ಆಶಿಸುತ್ತೇನೆ. ಹಿಂದೆ ನಾನು ಜಿಲ್ಲಾ ಪಂಚಾಯತ್ ನಲ್ಲಿದ್ದಾಗ ಹೈಸ್ಕೂಲ್, ಆಸ್ಪತ್ರೆ, ಪಶುಸಂಗೋಪನೆ, ಕುಡಿಯುವ ನೀರು, ರಸ್ತೆ ಇವೇ ಮುಂತಾದ ನಮಗೆ ಬೇಕಾಗಿದ್ದಂತಹ ಯೋಜನೆಗಳನ್ನೆಲ್ಲಾ ನಾವೇ ಮಂಜೂರು ಮಾಡುತ್ತಿದ್ದೆವು. ಆದರೆ ಈಗಲೂ ಅದು ಕಾನೂನಿನಲ್ಲಿ ಇದೆ. ಆದರೆ ಈ ಕಾನೂನನ್ನು ನಮಗೆ ಚಲಾಯಿಸಲು ಕೊಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ನಿರ್ದೇಶಕರಾದ ಬಸವರಾಜು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜನರ ಬೇಡಿಕೆ ಮತ್ತು ಆಶೋತ್ತರಗಳಿಗೆ ಅನುಗುಣವಾಗಿ ಯೋಜನೆಗಳನ್ನು ಸಿದ್ಧಪಡಿಸುವ ಸಲುವಾಗಿ ತಜ್ಞರಿಂದ ಸಲಹೆ ಸೂಚನೆಗಳನ್ನು ಪಡೆಯುವ ಸಲುವಾಗಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ-1 ಆದ ರಮಣ್ ದೀಪ್ ಚೌಧರಿ ಅವರು ಸ್ವಾಗತಿಸಿದರು. ಸಾಂಖ್ಯಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ-2 ಆದ ಮನೋಜ್ ಜೈನ್ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ 5 ನೇ ಹಣಕಾಸು ಆಯೋಗದ ಅಧ್ಯಕ್ಷರಾದ ಡಾ. ನಾರಾಯಣಸ್ವಾಮಿ, ಮಾಜಿ ರಾಜ್ಯ ಸಭಾ ಸದಸ್ಯರು ಹಾಗೂ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷರಾದ ಪ್ರೊ. ರಾಜೀವ್ ಗೌಡ ಅವರು ಉಪಸ್ಥಿತರಿದ್ದರು.

Post a Comment

0Comments

Post a Comment (0)